Friday, June 27, 2008

ಕಾಳಿದಾಸನ ಕಣ್ಣಲ್ಲಿ ' ಕೇಶ ವಿಲಾಸ'

ಅರಳಿದ ಮೊಲ್ಲೆಯ ಕರ್ಣಿಕೆ ಧರಿಸಿ

ಮುಡಿಗಿಟ್ಟರು ಕೇದಿಗೆ ಬಕುಲ

ಪರಊರವರೆದೆ ಮಿದ್ದರು ಗೆದ್ದರು

ಹೆಣ್ಣುಗಳವರನು ಅನಾಕುಲ (ವರ್ಷ ಋತು-ಪದ್ಯ20)


ಹೊಳೆವ ಮೀನೇ ಡಾಬು,ದಡದ ಬೆಳ್ಳಕ್ಕಿಯ ಸಾಲೇ ಹಾರ

ಹೊಳೆಯ ಮರಳುದಿಣ್ಣೆಗಳೇ ಜಾರುಜಘನವು

ಇಂಥ ನದಿಗಳೀಗ ರಸಿಕರೆದೆಗಳನು 'ಜುಂ'ಎನ್ನಿಸಿ

ಹಂಸ ನಡೆಯ,ತೂಗುಜಡೆಯ,ಹುಡುಗಿ ಹಾಗಿವೆ; (ಶರತ್ ಋತು-ಪದ್ಯ3)

ನಿಬಿಡವಾದ ನೀಳವಾದ ನೀಲ ಕೇಶರಾಶಿಯಲ್ಲಿ

ಬೆಳ್ಳಗಿರುವ ಜಾಜಿ ಹೂವ ಮುಡಿದು ಹೆಂಗಳು,

ಕಿವಿಗಳಲ್ಲಿ ಚಿನ್ನದೋಲೆಯಿರಿಸಿ,ನೀಲಿ ಕಮಲವನ್ನು

ಕಿವಿಯ ಹಿಂದೆ ಇಣುಕುವಂತೆ ಮುಡಿದುಕೊಂಡರು (ಶರತ್ ಋತು-ಪದ್ಯ19)


ಕೃಷ್ಣಾಗರು ಧೂಪವಿಟ್ಟು ಒಣಗಿಸಿ ಮುಡಿಯನ್ನು

ತೆಳ್ಳಗೆ ಬಳುಕುವ ದೇಹಕ್ಕೆ ಸವರಿ ಗಂಧವನ್ನು

ಚಿಗುರೆಲೆಗಳ ಇರಿಸಿ ಕಮಲ ಮುಖವನು ಸಿಂಗರಿಸಿ

ಸಜ್ಜೆಗೆ ಬಂದರು ಹೆಂಗಳು ಸುರತೋತ್ಸವ ಬಯಸಿ (ಹೇಮಂತ ಋತು-ಪದ್ಯ5)

ಕಾಳಿದಾಸನ ಋತುಸಂಹಾರವನ್ನು ಹೆಚ್.ಎಸ್.ವೆಂಕಟೇಶಮೂರ್ತಿಯವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ

ಹೆಚ್ಚೆಸ್ವಿಯವರ 'ಋತುವಿಲಾಸ' ದಿಂದ ಮೇಲಿನ ಪದ್ಯಗಳನ್ನು ಆಯ್ದಿದ್ದೇನೆ

ಚೆಂಗುಲಾಬಿಯ ನಡುವೆ ನಾನಿನ್ನ ಕಂಡೆ
ನಿನ್ನ ಮುಡಿಯೊಳಿತ್ತು ಮಲ್ಲಿಗೆಯ ದಂಡೆ

ಎಂದು ಹಾಡಿದ ಕೆ.ಎಸ್ .ನ. ಇಲ್ಲಿದಾರೆ

No comments: